‘ವಿಪಕ್ಷಗಳು ಒಂದೇ ಕುಟುಂಬಕ್ಕೆ ಚಪ್ಪಾಳೆ ಹೊಡೆಯುವ ಗುತ್ತಿಗೆ ತೆಗೆದುಕೊಂಡಿವೆ’ಎಂದು ಟೀಕಿಸಿದ್ದಾರೆ.
‘ಸಬ್ ಕಾ ಸಾಥ್’ಎಂಬ ಘೋಷ ವಾಕ್ಯದ ಮೂಲಕ ಬಿಜೆಪಿ ಮುಂದುವರಿಯುತ್ತಿದ್ದರೆ, ವಿಪಕ್ಷಗಳು ವೋಟ್ಬ್ಯಾಂಕ್ ರಾಜಕಾರಣ, ನಿರ್ದಿಷ್ಟ ಸಮುದಾಯ ಮತ್ತು ಕುಟುಂಬದ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿವೆ’ ಎಂದು ನಡ್ಡಾ ಟೀಕಿಸಿದ್ಧಾರೆ.
‘ನಾವು ಎಲ್ಲರ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದೇವೆ. ಅವರು ತಮ್ಮ ಸಹೋದರರು, ಚಿಕ್ಕಪ್ಪನ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಈಗ ಚಿಕ್ಕಪ್ಪನ ಬಗ್ಗೆಯೂ ಯೋಚಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ವಿರುದ್ಧಮಾರ್ಮಿಕವಾಗಿ ಹರಿಹಾಯ್ದಿದ್ದಾರೆ.