ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಅಜಿತ್ ಡೊಭಾಲ್ ಅವರನ್ನು ತಕ್ಷಣವೇ ತೆಗೆದು ಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
‘ಪೆಗಾಸಸ್ ಪ್ರಕರಣದ ನಂತರ ಡೊಭಾಲ್ ಮತ್ತೊಂದು ಭಯಂಕರ ಪ್ರಮಾದ ಎಸಗಿದ್ದು, ಅಮೆರಿಕ ಶೀಘ್ರವೇ ಬಹಿರಂಗಪಡಿಸಲಿದೆ. ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಈ ವರ್ಷದ ಮಧ್ಯ ದಲ್ಲಿ ಮೋದಿಯೇ ಹುದ್ದೆ ತ್ಯಜಿಸಬೇಕಾಗುತ್ತದೆ’ ಎಂದೂ ಟ್ವೀಟ್ ಮಾಡಿದ್ದಾರೆ.