ಎಂ.ಜಿ. ರಾಮಚಂದ್ರನ್ ಜನ್ಮ ದಿನಾಚರಣೆ ಇಂದು

ನವದೆಹಲಿ: ಎಐಎಡಿಎಂಕೆ ಸಂಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರ ಸಾಮಾಜಿಕ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
ಎಂಜಿಆರ್ ಜನ್ಮದಿನಾಚರಣೆಯಾದ ಭಾನುವಾರದಂದು ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬಡತನ ನಿರ್ಮೂಲನೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಎಂ.ಜಿ. ರಾಮಚಂದ್ರನ್ ಕೈಗೊಂಡಿದ್ದ ಪ್ರಯತ್ನಗಳು ಶ್ಲಾಘನೀಯವಾಗಿದ್ದವು ಎಂದು ಸ್ಮರಿಸಿದ್ದಾರೆ.
‘ಭಾರತ ರತ್ನ ಎಂಜಿಆರ್ ಜನರ ಹೃದಯದಲ್ಲಿ ನೆಲೆಸಿದ್ದರು. ಚಲನಚಿತ್ರ ರಂಗ ಇರಬಹುದು ಅಥವಾ ರಾಜಕೀಯ ಇರಬಹುದು. ಅವರನ್ನು ಎಲ್ಲ ಕ್ಷೇತ್ರದವರು ಗೌರವಿಸುತ್ತಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Bharat Ratna MGR lives in the hearts of several people. Be it the world of films or politics, he was widely respected. During his CM tenures, he initiated numerous efforts towards poverty alleviation and also emphasised on women empowerment. Tributes to MGR on his Jayanti.
— Narendra Modi (@narendramodi) January 17, 2021
ಎಂಜಿಆರ್ ಎಂದೇ ಖ್ಯಾತರಾಗಿದ್ದ ಎಂ.ಜಿ. ರಾಮಚಂದ್ರನ್ ಅವರು 1917ರಂದು ಜನಿಸಿದ್ದರು. ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಆಗಿದ್ದ ಅವರು, ಸಿ.ಎನ್. ಅಣ್ಣಾದೊರೈ ನೇತೃತ್ವದ ಡಿಎಂಕೆ ಪಕ್ಷ ಸೇರಿದ್ದರು. ಅಣ್ಣಾದೊರೈ ನಿಧನದ ಬಳಿಕ ಡಿಎಂಕೆ ಅಧ್ಯಕ್ಷರಾಗಿದ್ದ ಎಂ. ಕರುಣಾನಿಧಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮದೇ ಆದ ಹೊಸ ಪಕ್ಷವನ್ನು 1972ರಲ್ಲಿ ಸ್ಥಾಪಿಸಿದರು.
ಸುಮಾರು 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವರು, ಹಲವು ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಅದರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಮಹತ್ವದ್ದಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.