ಆದರೆ, ದೇಶಮುಖ್ ಅಥವಾ ಅವರ ಕುಟುಂಬ ಸದಸ್ಯರನ್ನು ಚಾರ್ಜ್ ಶೀಟ್ನಲ್ಲಿ ಆರೋಪಿಯನ್ನಾಗಿ ಮಾಡಿಲ್ಲ. ಈ ವರ್ಷದ ಏಪ್ರಿಲ್ 21 ರಂದು ಎನ್ಸಿಪಿ ನಾಯಕನ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಇ.ಡಿ. ದೇಶಮುಖ್ ಮತ್ತು ಆತನ ಸಹಚರರ ವಿರುದ್ಧ ತನಿಖೆ ಆರಂಭಿಸಿತು. ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.