ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಿಂದ ಮುಂಗಾರು ಚುರುಕು ನಿರೀಕ್ಷೆ

Last Updated 4 ಜುಲೈ 2021, 15:17 IST
ಅಕ್ಷರ ಗಾತ್ರ

ನವದೆಹಲಿ: ಕೆಲ ದಿನಗಳಿಂದ ಕ್ಷೀಣಿಸಿದ್ದ ನೈರುತ್ಯ ಮುಂಗಾರು ಇದೇ 8ರಿಂದ ಚುರುಕಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್‌ ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ವಾತಾವರಣವನ್ನು ಗಮನಿಸಿದರೆ ಕೆಲ ದಿನಗಳಲ್ಲಿ ಮುಂಗಾರು ಚುರುಕಾಗುವ ಲಕ್ಷಣಗಳು ಗೋಚರಿಸಿವೆ. ದೇಶದ ದಕ್ಷಿಣ, ಪಶ್ಚಿಮ ಕರಾವಳಿ, ಪೂರ್ವ ಮಧ್ಯ ಭಾಗದಲ್ಲಿ ಇದೇ 8ರಿಂದ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಜೂನ್ ತಿಂಗಳ ಮೊದಲ ಎರಡೂವರೆ ವಾರಗಳವರೆಗೆ ಉತ್ತಮ ಮಳೆ ಸುರಿಸಿದ್ದ ಮುಂಗಾರು ಬಳಿಕ ಕ್ಷೀಣಿಸಿತ್ತು. ದೆಹಲಿ, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮದ ಭಾಗಗಳು, ಪಂಜಾಬ್, ರಾಜಸ್ಥಾನದ ಪಶ್ಚಿಮ ಭಾಗಗಳಿಗೆ ಇನ್ನೂ ಮುಂಗಾರು ಪ್ರವೇಶವೇ ಆಗಿಲ್ಲ. ದೆಹಲಿ ಸೇರಿದಂತೆ ಇತರ ಭಾಗಗಳಿಗೆ ಇದೇ 11ರ ವೇಳೆಗೆ ಮುಂಗಾರು ಪ್ರವೇಶಿಸಬಹುದು ಎಂದು ಅವರು ತಿಳಿಸಿದ್ದಾರೆ.

ದೇಶದ ಬಹುತೇಕ ಭಾಗಗಳಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT