ಮುಂಜಾಗ್ರತೆಯಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು. ಸಾಲುಗಟ್ಟಿ ಬಂದ ಅಭಿಮಾನಿಗಳು ಎಸ್.ಪಿ.ಬಿ ಅವರ ಶರೀರದ ಅಂತಿಮ ದರ್ಶನ ಪಡೆದರು.
ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಿರುವಳ್ಳುರ ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಚಿತ್ರ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಹಾಸ್ಯ ನಟ ಮಯಿಲ್ ಸಾಮಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು.
ಅಭಿಮಾನಿಗಳ ಗುಂಪು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿಯೋಜಿತ ಸ್ಥಳದಲ್ಲಿ ಮಾತ್ರವೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಚರಣ್ ನಡೆಸಿಕೊಡುವರು.