ಸುಮಾರು 300 ವರ್ಷಗಳ ಹಿಂದೆ ಪಾಂಡುರ್ನದ ಯುವಕನೊಬ್ಬ ಸಾವರಗಾಂವ್ನಿಂದ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯೊಂದಿಗೆ ನದಿಯನ್ನು ದಾಟಲು ಪ್ರಯತ್ನಿಸುತ್ತಾನೆ. ಆಗ ಇಬ್ಬರಿಗೂ ಕಲ್ಲುಗಳ ರಾಶಿ ಅಡ್ಡಿಯಾಗುತ್ತದೆ. ಪಾಂಡುರ್ನ ಗ್ರಾಮಸ್ಥರು ಯುವಕನ ನೆರವಿಗೆ ಧಾವಿಸುತ್ತಾರೆ. ನಂತರ ಯುವಕನು ಯುವತಿಯೊಂದಿಗೆ ಸುರಕ್ಷಿತವಾಗಿ ಊರು ಸೇರುತ್ತಾನೆ. ಇದರ ಕಾರಣವಾಗಿ ಈ ಉತ್ಸವ ನಡೆಯುತ್ತದೆ ಎಂದು ಪ್ರತೀತಿ ಇದೆ.