ಈ ಬಗ್ಗೆ ಮಾತನಾಡಿರುವ ಸುಖದೇವ್, ‘ರೈತರು ಕಳೆದ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರಾದರೂ ಅವರ ಮಾತನ್ನು ಆಲಿಸಲು ಕೇಂದ್ರ ಸರ್ಕಾರವು ಸಿದ್ಧವಿಲ್ಲ. ಹೀಗಾಗಿ ನಾನು ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ. ಯಾವಾಗ ಬಿಜೆಪಿ ಸರ್ಕಾರವು ನಮ್ಮ ಹಿರಿಯರನ್ನು ನಿರ್ಲಕ್ಷಿಸಿತೋ ಆಗ ಅವರು (ರೈತರು) ತಮ್ಮ ಹೋರಾಟವನ್ನು ದೆಹಲಿ ಗಡಿ ಪ್ರದೇಶಕ್ಕೆ ಸ್ಥಳಾಂತರಿಸಿದರು. ಈ ಪುರಸ್ಕಾರವು ನಿಷ್ಪ್ರಯೋಜಕವಾಗಿದೆ’ ಎಂದು ಹೇಳಿದ್ದಾರೆ.