‘ಹುಟ್ಟಿನಿಂದಲೇ ಗ್ಲುಕೊಮಾ ಕಾಯಿಲೆ ಹೊಂದಿದ್ದ ನನ್ನ ಮಗ ಸಾಫ್ಟ್ವೇರ್ ಇಂಜಿನಿಯರ್ ಆಗುವ ಆಕಾಂಕ್ಷೆ ಹೊಂದಿದ್ದ. ಆತ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಬಳಿಕವೂ ನಾವು ಅವನ ಆಸೆಗೆ ಬಂಬಲವಾಗಿ ನಿಂತಿದ್ದೆವು. ಅವನು5ನೇ ತರಗತಿಯವರೆಗೆ ವಿಶೇಷ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಬಳಿಕ ಸಾಮಾನ್ಯ ಶಾಲೆಗೆ ಸೇರಿಸಿದೆವು. ಆತನ ಸಹೋದರಿಯೊಬ್ಬಳು ಆತನಿಗೆ ಓದಿಗೆ ನೆರವಾದಳು. ವಿಶೇಷವಾಗಿಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆಕೆ ಸಹಕಾರ ನೀಡಿದಳು’ ಎಂದು ಇಂದೋರ್ನಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಯಶ್ ತಂದೆಯಶ್ಪಾಲ್ ಹೇಳಿದರು.