‘ಭಾರತದ ಡಿಜಿಟಲ್ ಕ್ರಾಂತಿ ಸಾಧಿಸಲು ಮೊಬೈಲ್ ಸಂಪರ್ಕ ನಿರ್ಣಾಯಕವಾಗಿದೆ ಎಂಬ ಅಂಶದಿಂದ ನಾವು ಹಿಂದೆ ಸರಿಯಬಾರದು. ಇದರಿಂದ ನಾವು ಹೊರಗುಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೇ ಫೈಬರ್ ನೆಟ್ ಸಂಪರ್ಕವನ್ನೂ ಭಾರತ ಒಂದು ಮಿಷನ್ ರೀತಿ ಪೂರ್ಣಗೊಳಿಸಬೇಕು’ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮುಕೇಶ್ ಅಂಬಾನಿ ಹೇಳಿದ್ದಾರೆ.