ಹಿಮಪ್ರವಾಹ: ತಪೋವನದ ಸುರಂಗದಲ್ಲಿ ಸಿಲುಕಿದ್ದ 30 ಮಂದಿ ರಕ್ಷಣೆ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಹಿಮಪ್ರವಾದಿಂದಾಗಿ ತಪೋವನ ಸಮೀಪದ ಸುರಂಗದಲ್ಲಿ 34 ಮಂದಿ ಸಿಲುಕಿದ್ದಾರೆಂದು ಅಂದಾಜಿಸಲಾಗಿದ್ದು, ಅದರಲ್ಲಿ 30 ಮಂದಿಯನ್ನು ಪರಿಹಾರ ಕಾರ್ಯಾಚರಣೆ ಪಡೆಯುವವರು ರಕ್ಷಿಸಿದ್ದಾರೆ.
ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ಮತ್ತು ಇತರೆ ರಾಜ್ಯದ ವಿಪತ್ತು ನಿರ್ವಹಣಾ ಪಡೆಗಳು ಇಡೀ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಕಲ್ಲುಬಂಡೆಗಳು ರಾಶಿಗಳು, ಕೆಸರಿನ ನಡುವೆ ಸಿಲುಕಿದ್ದವರನ್ನು ವಿಪತ್ತು ನಿರ್ವಹಣಾ ಪಡೆಯವರು ರಕ್ಷಿಸಿದ್ದಾರೆ.
‘ನಮ್ಮ ತಂಡಗಳು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಸಿಲುಕಿದ್ದ 30 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಗೆ ವಿಶೇಷ ಉಪಕರಣಗಳನ್ನು ಬಳಸಲಾಗಿತ್ತು‘ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ದೆಹಲಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸುರಂಗದೊಳಗೆ ದೊಡ್ಡ ಪ್ರಮಾಣದಲ್ಲಿ ಕಲ್ಲು ಬಂಡೆಗಳು ರಾಶಿಯಾಗಿದ್ದವು. ಸುರಂಗದ ಒಳಗೆ 80 ಮೀಟರ್ವರೆಗೆ ತುಂಬಿಕೊಂಡಿದ್ದ ಕಲ್ಲುಬಂಡೆಗಳನ್ನು ತೆರವುಗೊಳಿಸಿದ್ದೇವೆ. ಈಗ ಸದ್ಯ ಕಾರ್ಯಾಚರಣೆಯಲ್ಲಿ ಐಟಿಬಿಪಿಯ 300 ಯೋಧರನ್ನು ನಿಯೋಜಿಸಲಾಗಿದೆ‘ ಎಂದು ಪಾಂಡೆ ತಿಳಿಸಿದರು. ಮತ್ತೊಬ್ಬ ಅಧಿಕಾರಿ ‘ಸುರಂಗದಲ್ಲಿ 34 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಿದರು.
ಇದನ್ನೂ ಓದಿ: ಉತ್ತರಾಖಂಡ ಹಿಮನದಿ ಸ್ಫೋಟ: 15 ಮಂದಿಯ ರಕ್ಷಣೆ, 14 ಮೃತದೇಹ ಪತ್ತೆ
ಐಟಿಪಿಬಿ ಪಡೆ ಹೆಚ್ಚುವರಿ ಪ್ರಧಾನ ನಿರ್ದೇಶಕ(ಪಶ್ಚಿಮ ಕಮಾಂಡ್)ಎಂ.ಎಸ್. ರಾವತ್ ಅವರು ಸೋಮವಾರ ಘಟನಾ ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ಉತ್ತರಾಖಂಡ ಹಿಮನದಿ ಸ್ಫೋಟ: 15 ಮಂದಿಯ ರಕ್ಷಣೆ, 14 ಮೃತದೇಹ ಪತ್ತೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.