ತಮ್ಮ ಮಗಳ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬೇಡಿ ಎಂಬ ಪೋಷಕರ ಭಾವನಾತ್ಮಕ ಮನವಿಯ ನಡುವೆಯೂ ನಾರಾಯಣ ರಾಣೆ, ದಿಶಾಅತ್ಯಾಚಾರ ಮತ್ತು ಕೊಲೆಯಿಂದಸಾವಿಗೀಡಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ದಿಶಾ ಸಾವಿನ ರಹಸ್ಯ ಮಾರ್ಚ್ 7ರ ಬಳಿಕ ಬಯಲಾಗಲಿದೆ ಎಂದಿದ್ದರು. ಈ ಬಗ್ಗೆ ಮಹಿಳಾ ಆಯೋಗವು ಮುಂಬೈ ಪೊಲೀಸರಿಗೆ ನೋಟಿಸ್ ನೀಡಿತ್ತು.