ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈಥ್ವಲಿಯಾದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ‘ವಿರಾಟ್ ರಾಮಾಯಣ ಮಂದಿರ’ ನಿರ್ಮಾಣವಾಗಲಿದೆ. ಪಟ್ನಾ ಮೂಲದ ‘ಮಹಾವೀರ್ ಮಂದಿರ್ ಟ್ರಸ್ಟ್’ ದೇಗುಲ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. ಈ ದೇಗುಲಕ್ಕೆ ಪೂರ್ವ ಚಂಪಾರಣ್ ಜಿಲ್ಲೆಯ ಉದ್ಯಮಿ ಇಶ್ತಿಯಾಕ್ ಅಹಮದ್ ಖಾನ್ ಭೂಮಿ ನೀಡಿದ್ದಾರೆ ಎಂದು ಟ್ರಸ್ಟ್ನ ಮುಖ್ಯಸ್ಥ, ಐಪಿಎಸ್ ಮಾಜಿ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ.