‘ಮುಖ್ಯವಾಹಿನಿಯ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ ಪ್ರದೀಪ್, ಕೆಲ ವರ್ಷಗಳಿಂದ ಆನ್ಲೈನ್ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಗೆ ಸಂಬಂಧಿಸಿದಂತೆ ಅವರು ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದರು’ ಎಂದು ಪ್ರದೀಪ್ ಕುಟುಂಬ ಮತ್ತು ಸ್ನೇಹಿತರು ಆರೋಪಿಸಿದ್ದು, ‘ಈ ಹಿನ್ನೆಲೆಯಲ್ಲೇ ಅವರ ಅಪಘಾತ ನಡೆದಿರಬಹುದು’ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.