ಅಸ್ಸಾಂನ ಕರೀಮ್ಗಂಜ್ನಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿ ಉದ್ದೇಶಿಸಿ ಮೋದಿಮಾತನಾಡಿದರು.ಆದರೆ, ಪ್ರಧಾನಿ ಅವರು ತಮ್ಮ ಭಾಷಣದ ಎಲ್ಲಿಯೂ ಪೌರತ್ವ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಸಿಎಎ ಅಥವಾ ಎನ್ಆರ್ಸಿ ಕುರಿತಂತೆ ದಕ್ಷಿಣ ಅಸ್ಸಾಂನ ಮತದಾರರು ಆತಂಕದಲ್ಲಿದ್ದಾರೆ. ಏಕೆಂದರೆ ಬಹುತೇಕ ಸಮಾನ ಸಂಖ್ಯೆಯ ಬಂಗಾಳಿ ಮಾತ ನಾಡುವ ಹಿಂದೂಗಳು ಮತ್ತು ಮುಸ್ಲಿಮರನ್ನು ಈ ಪ್ರದೇಶ ಹೊಂದಿದೆ. ಎನ್ಆರ್ಸಿಯಿಂದ ಬಂಗಾಳಿ ಮಾತನಾಡುವ ಮುಸ್ಲಿಮರು ಚಿಂತಿತರಾಗಿದ್ದಾರೆ. ಆದರೆ ಸಿಎಎ ಮೂಲಕ ಪೌರತ್ವದ ಭರವಸೆ ಮೋದಿಯವರು ನೀಡುತ್ತಾರೆ ಎಂಬ ವಿಶ್ವಾಸದಲ್ಲಿಬಂಗಾಳಿ ಮಾತನಾಡುವ ಹಿಂದೂಗಳು ಇದ್ದರು.