ನವದೆಹಲಿ: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಆ್ಯಪ್ ಅನ್ನು ಪ್ರಧಾನಿ ಮೋದಿ ಶನಿವಾರ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, 'ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶವು ಕೇವಲ ಜನರಿಗೆ ನೀರನ್ನು ಒದಗಿಸುವುದಲ್ಲ. ಇದು ವಿಕೇಂದ್ರೀಕರಣದ ದೊಡ್ಡ ಚಳವಳಿಯಾಗಿದೆ. ಇದು ಗ್ರಾಮ ಪ್ರೇರಿತ ಹಾಗೂ ಮಹಿಳಾ ಕೇಂದ್ರಿತ ಚಳವಳಿ. ಜನರ ಪಾಲ್ಗೊಳ್ಳುವಿಕೆಯು ಇದರ ಪ್ರಮುಖ ಆಧಾರವಾಗಿದೆ' ಎಂದು ಹೇಳಿದರು.
'ಈ ಚಳವಳಿಗೆ ಸಂಬಂಧಿಸಿದ ಪ್ರತಿಯೊಂದು ವಿವರವೂ ಜಲ ಜೀವನ್ ಮಿಷನ್ ಆ್ಯಪ್ನಲ್ಲಿ ಲಭ್ಯವಿದೆ' ಎಂದು ಮೋದಿ ಹೇಳಿದರು.
2019 ರಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಆರಂಭಿಸಿದಾಗಿನಿಂದ ಎರಡು ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
'ದೇಶದ 80 ಜಿಲ್ಲೆಗಳ ಸುಮಾರು 1.25 ಲಕ್ಷ ಗ್ರಾಮಗಳಲ್ಲಿನ ಪ್ರತಿ ಮನೆಯೂ ಇಂದು ನಲ್ಲಿಯ ನೀರನ್ನು ಪಡೆಯುತ್ತಿದೆ' ಎಂದು ಮೋದಿ ಹೇಳಿದರು.