ಹರಾಜು ಗೆದ್ದವರು ತರಂಗಾಂತರಕ್ಕೆ ಸಂಬಂಧಿಸಿದ ಹಣವನ್ನು ತಕ್ಷಣಕ್ಕೆ ಪಾವತಿಸಬೇಕಾಗಿಲ್ಲ. ಈ ಮೊತ್ತವನ್ನು ಅವರು 20 ಸಮಾನ ವಾರ್ಷಿಕ ಕಂತುಗಳಲ್ಲಿ, ಪ್ರತಿ ವರ್ಷದ ಆರಂಭದಲ್ಲಿ ಪಾವತಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕ್ರಮದಿಂದಾಗಿ ದೂರಸಂಪರ್ಕ ವಲಯದ ಉದ್ದಿಮೆಗಳಿಗೆ ಉದ್ಯಮ ನಡೆಸುವ ವೆಚ್ಚ ಕಡಿಮೆ ಆಗುವ ನಿರೀಕ್ಷೆ ಇದೆ ಎಂದೂ ಕೇಂದ್ರ ಹೇಳಿದೆ.