ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು, ‘ನೀವೆಲ್ಲರೂ ಟೂಲ್ಕಿಟ್ ಪ್ರಕರಣವನ್ನು ಕೇಳಿರಬಹುದು. ಅಸ್ಸಾಂ ಚಹಾದ ಹೆಸರಿಗೆ ಮಸಿ ಬಳಿಯಲು ಮತ್ತು ಚಹಾ ತೋಟಗಳನ್ನು ನಾಶ ಮಾಡಲು ಆ ದುಷ್ಟರು ಸಂಚು ರೂಪಿಸಿದ್ದರು. ಅಂಥವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ, ಇಲ್ಲಿಗೆ ಬಂದು ಚಹಾ ಕಾರ್ಮಿಕರ ಬಳಿ ಮತ ಕೇಳುತ್ತಿದೆ’ ಎಂದು ಪ್ರಧಾನಿ ಟೀಕಿಸಿದ್ದಾರೆ.