ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ದಾಳಿ: ನಕ್ಸಲ್‌ ಹತ್ಯೆ

Last Updated 1 ಆಗಸ್ಟ್ 2022, 16:55 IST
ಅಕ್ಷರ ಗಾತ್ರ

ರಾಯಪುರ: ಜಿಲ್ಲಾ ಮೀಸಲು ಕಾವಲುಪಡೆ ಮತ್ತು ನಕ್ಸಲರ ಮಧ್ಯೆ ಸುಕ್ಮಾ ಜಿಲ್ಲೆಯ ಕಾಡೊಂದರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್‌ ಅನ್ನು ಸೋಮವಾರ ಹತ್ಯೆ ಮಾಡಲಾಗಿದೆ.

‘ಕಾವಲುಪಡೆಯು ಬಂಢಾರದರಾ ಹಳ್ಳಿ ಬಳಿಯ ಕಾಡೊಂದರಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಗಸ್ತು ತಿರುಗುತ್ತಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ದಾಳಿ ಮುಗಿದ ಬಳಿಕ, ಸ್ಥಳದಲ್ಲಿ ಒಬ್ಬ ನಕ್ಸಲನ ಮೃತದೇಹ ಪತ್ತೆಯಾಯಿತು’ ಎಂದು ಐಜಿಪಿ ಸುಂದರ್‌ರಾಜ್‌ ಪಿ. ಮಾಹಿತಿ ನೀಡಿದರು.

‘ಮೃತರನ್ನು ಮಾಧ್ವಿ ಹಡ್ಮಾ ಎಂದು ಮೇಲ್ನೊಟಕ್ಕೆ ಗುರುತಿಸಲಾಗಿದೆ. ಈಕೆ ಮಾವೋವಾದಿಗಳ ವಿಭಾಗೀಯ ಸಮಿತಿಯ ಸದಸ್ಯೆಯಾಗಿದ್ದಳು. ಘಟನೆ ನಡೆದ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆದಿದೆ. ಸುಕ್ಮಾ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ನಡೆದ ಮೂರನೇ ಗುಂಡಿನ ದಾಳಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT