ಈ ಸಂಬಂಧ ಮುಂಬೈ ಪೊಲೀಸರಿಗೆ ನೋಟಿಸ್ ನೀಡಿರುವ ಎನ್ಸಿಪಿಸಿಆರ್, ‘ಆದಿತ್ಯ ಅವರ ವಿರುದ್ಧ ತಮಗೆ ದೂರು ಬಂದಿದೆ. ‘ಆರೆ ಅರಣ್ಯ ರಕ್ಷಿಸಿ’ ಪ್ರತಿಭಟನೆಯು ರಾಜಕೀಯ ಅಭಿಯಾನವಾಗಿದ್ದು ಮುಂಬೈ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಆದಿತ್ಯ ಠಾಕ್ರೆ ಅವರು, ಶಿವಸೇನಾದ ಯುವಘಟಕವಾಗಿರುವ ಯುವಸೇನಾದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.