ಗಂಗಾ ನದಿ ನೀರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ನಡಿ (ಎನ್ಎಂಸಿಜಿ) ಕಠಿಣ ಕ್ರಮಗಳನ್ನು ಕೈಗೊಂಡಂತೆ ತೋರುತ್ತಿಲ್ಲ. ನದಿ ನೀರನ್ನು ಸ್ನಾನಕ್ಕೆ ಮಾತ್ರವಲ್ಲ ಧಾರ್ಮಿಕ ವಿಧಿಗೂ ಬಳಸಲಾಗುತ್ತದೆ. ಹೀಗಾಗಿ, ಮಾರ್ಗಸೂಚಿಗಳಲ್ಲಿ ಹೇಳಿರುವಂತೆ ಗಂಗಾ ನದಿ ನೀರು ಸ್ವಚ್ಛವಾಗಿರಬೇಕು ಎಂದು ನ್ಯಾಯಮೂರ್ತಿ ಗೋಯಲ್ ಹೇಳಿದರು.