‘ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಗುಜರಿಗಳು, ಗ್ಯಾರೆಜ್ ಸೇರಿದಂತೆ ವಿವಿಧೆಡೆ ತನಿಖಾ ತಂಡ ಪರಿಶೀಲನೆ ನಡೆಸಿದೆ. ಶಂಕಿತರ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ದೀಪಕ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಮಂಪಡ, ಕೊಲ್ಸೆವಾಡಿ, ವಿಠ್ಠಲ್ವಾಡಿ, ಅಂಬರ್ ನಾಥ್, ನರ್ ಪೊಲಿ, ಕೇಂದ್ರ ಮತ್ತು ಬಜಾರ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ‘ ಎಂದು ಅವರು ತಿಳಿಸಿದ್ದಾರೆ.