‘ಜಲಮೂಲಗಳ ರಕ್ಷಣೆಗಾಗಿ ಇಲ್ಲಿವರೆಗೆ ಕೈಗೊಂಡಿರುವ ಕ್ರಮಗಳ ಸಮರ್ಪಕವಾಗಿಲ್ಲ ಎನ್ನಿಸುತ್ತಿದೆ. ಜಲಮೂಲಗಳನ್ನು ರಕ್ಷಿಸುವುದರಿಂದ ನದಿ ಸೌಂದರ್ಯ ಹೆಚ್ಚುವ ಜತೆಗೆ, ವಾತಾವರಣ ಉತ್ತಮವಾಗುತ್ತದೆ. ಕುಡಿಯಲು ಶುದ್ಧ ನೀರು ಲಭ್ಯವಾಗುತ್ತದೆ. ಜಲಚರಗಳು ವೃದ್ಧಿಯಾಗುತ್ತವೆ, ಅಂತರ್ಜಲ ಮರುಪೂರಣವಾಗುತ್ತದೆ ಮಾತ್ರವಲ್ಲ, ನದಿಗಳ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿದೆ.