‘ಕುಶ್ವಾಹಾ ಅವರನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ. ಅವರು ಅಸಾಧಾರಣ ವಕೀಲೆ ಮಾತ್ರವಲ್ಲದೆ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಅವರು ಪಶ್ಚಿಮ ಉತ್ತರ ಪ್ರದೇಶ, ಇಟಾವಾ ಮತ್ತು ಬುಂದೇಲ್ಖಂಡದಲ್ಲಿ ಮೌರ್ಯ, ಶಾಕ್ಯ ಮತ್ತು ಕುಶ್ವಾಹ ಸಮುದಾಯಗಳಲ್ಲಿ ಉತ್ತಮ ಪ್ರಭಾವ ಹೊಂದಿದ್ದಾರೆ. ಭವಿಷ್ಯದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿಯನ್ನೂ ನೀಡಲಾಗುವುದು‘’ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.