ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಅವರು, ನ್ಯಾಯಾಂಗದಲ್ಲಿ ಜಿಲ್ಲಾ ಕೋರ್ಟ್ಗಳು ‘ಕೆಳಹಂತದ ಕೋರ್ಟ್‘ ಎಂಬ ಮನಸ್ಥಿತಿಯಿಂದ ಜನತೆ ಮೊದಲು ಹೊರಬರಬೇಕು. ಜಿಲ್ಲಾ ಕೋರ್ಟ್ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು. ಹಲವರಿಗೆ ಮೊದಲು ಮುಖಾಮುಖಿಯಾಗುವ ನ್ಯಾಯ ವ್ಯವಸ್ಥೆ ಎಂಬುದನ್ನು ಮನಗಾಣಬೇಕು ಎಂದರು.