‘ಭಯೋತ್ಪಾದನೆಗೆ ಹಣ ಇಲ್ಲ’ (ಎನ್ಎಂಎಫ್ಟಿ) ಸಮಾವೇಶದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ವಿಷಯದ ಕುರಿತು ಅವರು ಶನಿವಾರ ಮಾತನಾಡಿದರು. ‘ಭಯೋತ್ಪಾದಕರಿಗೆ ಸ್ವರ್ಗ ಎನಿಸಿರುವ ದೇಶಗಳಲ್ಲಿ ಅವರ ಅನಿಯಂತ್ರಿತ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹೇರಬೇಕಿದೆ. ಎಲ್ಲ ದೇಶಗಳು ತಮ್ಮ ಭೌಗೋಳಿಕ–ರಾಜಕೀಯ ಹಿತಾಸಕ್ತಿಗಳನ್ನು ಬದಿಗಿರಿಸಿ, ಈ ಯತ್ನದಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದರು.