ಶಿವಸೇನಾಪಕ್ಷವು ನಿಮ್ಮ ವಿರುದ್ಧ ಕ್ರಮಕ್ಕೆ ವಿಧಾನಸಭೆ ಉಪ ಸಭಾಪತಿಯವರಿಗೆ ಮನವಿ ಸಲ್ಲಿಸಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ‘ಶಿವಸೇನೆಯ 55 ಶಾಸಕರ ಪೈಕಿ 44 ಮಂದಿ ನಮ್ಮ ಜೊತೆ ಗುವಾಹಟಿಗೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಮತ್ತು ಸಂಖ್ಯೆಯೇ ಮುಖ್ಯ. ಹಾಗಾಗಿ, ನಮ್ಮ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೇಳಿದ್ದಾರೆ.