ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ, ರಸ್ತೆಯಲ್ಲಿ ಮೃತಪಟ್ಟಿದ್ದುಆಮ್ಲಜನಕ ಕೊರತೆಯಿಂದಲೇ ಅಲ್ಲವೇ ಎಂಬ, ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದ್ದಾರೆ. ‘ಆರೋಗ್ಯ ವಿಷಯವು ಆಯಾ ರಾಜ್ಯಗಳಿಗೇ ಸಂಬಂಧಿಸಿದ್ದಾಗಿದ್ದು, ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯ ವರದಿಯನ್ನು ನಿಯಮಿತವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಆದರೆ, ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದ ಬಗ್ಗೆ ರಾಜ್ಯಗಳಿಂದಾಗಲೀ, ಕೇಂದ್ರಾಡಳಿತ ಪ್ರದೇಶಗಳಿಂದಾಗಲೀ ವರದಿ ಬಂದಿಲ್ಲ’ ಎಂದು ಸಚಿವೆ ಹೇಳಿದ್ದಾರೆ.