‘ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರಿಂದ ಗಳಿಸುತ್ತಿದ್ದ ಆದಾಯದಲ್ಲಿ ಭಾರಿ ನಷ್ಟವುಂಟಾಗಿದೆ. ಸಾಮಾನ್ಯ ರೈಲುಗಳ ಸೇವೆಯನ್ನು ನಿರ್ದಿಷ್ಟ ದಿನಾಂಕದಂದೇ ಪುನರಾರಂಭಿಸುವ ಕುರಿತು ಹೇಳುವುದು ಅಸಾಧ್ಯ. ರಾಜ್ಯ ಸರ್ಕಾರಗಳೊಂದಿಗೆ ನಮ್ಮ ವ್ಯವಸ್ಥಾಪಕರು ಚರ್ಚೆ ನಡೆಸುತ್ತಿದ್ದಾರೆ. ಈಗಲೂ ನಾವು ಸಾಮಾನ್ಯ ಸ್ಥಿತಿಗೆ ಮೊದಲಿನಂತೆ ಮರಳಲು ಸಾಧ್ಯವಾಗಿಲ್ಲ. ಹಾಗಾಗಿ, ನಾವು ಯಾವಾಗ ಸಾಮಾನ್ಯ ರೈಲ್ವೆ ಸೇವೆಯನ್ನು ಎಂದಿನಿಂದ ಪುನರಾರಂಭಿಸುತ್ತೇವೆ ಎಂದು ಹೇಳುವುದು ಅಸಾಧ್ಯ’ ಎಂದು ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.