ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಹ ಈ ವರದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆಸ್ಕರ್ ಪುರಸ್ಕಾರದ ಛುಪಾ ರುಸ್ತುಂ ವಿಭಾಗದ ಪ್ರಶಸ್ತಿಯು ಡಿಆರ್ಡಿಒ ಹಾಗೂ ಗೃಹ ಸಚಿವಾಲಯಕ್ಕೆ ಸಲ್ಲಬೇಕು. ಸೂಕ್ಷ್ಮವಾದ ರಕ್ಷಣಾ ಗುತ್ತಿಗೆಗಳನ್ನು ವಿದೇಶದ ಅಪರಿಚಿತ ಕಂಪನಿಗಳು ನಿರ್ವಹಿಸುತ್ತಿರುವುದಕ್ಕೆ ಸಂತಸವಾಗಿದೆ’ ಎಂದು ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.