ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆಯನ್ನೂ ಈ ಹಿಂದೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ಮಂಡಿಸಲಾಗಿತ್ತು. ಇವುಗಳಿಗೆ ಅಸಮ್ಮತಿ ಸೂಚಿಸಿ ಶಾಸನಬದ್ಧ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಇದು ‘ನಿರಂಕುಶ’ ಮತ್ತು ‘ಅಧಿಕಾರದ ವ್ಯಾಮೋಹ’ದಿಂದ ಕೂಡಿದ ನಡೆ ಎಂದು ಹೇಳಿದ್ದಾರೆ.