‘ಪಾಕಿಸ್ತಾನದೊಂದಿಗೆ ಭಾರತವು ಸಾಮಾನ್ಯ ನೆರೆಯ ಸಂಬಂಧವನ್ನಷ್ಟೇ ಬಯಸುತ್ತದೆ. ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಯಾವುದೇ ವಿಚಾರವವನ್ನು ದ್ವಿಪಕ್ಷೀಯವಾಗಿ ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂಬುದು ಭಾರತದ ಸ್ಥಿರವಾದ ನಿಲುವು. ಅಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ’ ಎಂದೂ ಸಚಿವಾಲಯ ಅಭಿಪ್ರಾಯಪಟ್ಟಿದೆ.