ಇಲ್ಲಿನ ಸೇನೆಯ ಕಾಪ್ಸ್–15ರ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇತ್ತೀಚಿನವರೆಗೆ ವಿದೇಶಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸ್ಥಳೀಯರನ್ನು ಮುಂಚೂಣಿಗೆ ಬಿಡುತ್ತಿದ್ದರು. ಆದರೆ ಈಗ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಅವರಿಗೆ ಅಡಗುತಾಣಗಳಿಂದ ಹೊರ ಬರುವುದು ಅನಿವಾರ್ಯವಾಗಿದ್ದು, ಹೀಗಾಗಿ ವಿದೇಶಿ ಉಗ್ರರ ಸಂಪರ್ಕವು ಭದ್ರತಾ ಪಡೆಗಳಿಗೆ ಗೋಚರವಾಗುತ್ತಿದೆ’ ಎಂದು ಅವರು ಹೇಳಿದರು.