ಚೆನ್ನೈ: ಸೆಪ್ಟೆಂಬರ್ 7ನೇ ತಾರೀಖಿನಿಂದ ತಮಿಳುನಾಡಿನಲ್ಲಿ ಪ್ಯಾಸೆಂಜರ್ ರೈಲು ಮತ್ತು ಅಂತರ್ ಜಿಲ್ಲಾ ಬಸ್ ಸೇವೆ ಆರಂಭಿಸುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರಹೇಳಿದ್ದಾರೆ.
ಈಗ ಜಿಲ್ಲೆಗಳಲ್ಲಿ ಬಸ್ ಸಂಚಾರ ನಡೆಸುತ್ತಿದ್ದು, ಅಂತರ್ ಜಿಲ್ಲಾ ಬಸ್ ಸೇವೆ ಬೇಕು ಎಂದು ಜನರು ಕೇಳುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ, ಮಾರ್ಗಸೂಚಿ ಅನುಸರಿಸಿಕೊಂಡು ತಮಿಳುನಾಡು ರಾಜ್ಯದಾದ್ಯಂತ ಖಾಸಗಿ ಮತ್ತು ಸರ್ಕಾರಿ ಬಸ್ಗಳ ಸೇವೆ ಆರಂಭವಾಗಲಿದೆ ಎಂದು ಪಳನಿಸ್ವಾಮಿ ಹೇಳಿಕೆ ನೀಡಿದ್ದಾರೆ.
ಅದೇ ವೇಳೆ ಪ್ಯಾಸೆಂಜರ್ ರೈಲು ಸೇವೆಯೂ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ನಿರ್ದಿಷ್ಟ ಮಾರ್ಗಗಳಲ್ಲಿ ಈಗಾಗಲೇ ಅಂತರ್ ರಾಜ್ಯ ರೈಲು ಸೇವೆ ಇದೆ.