ಆಗಿನ ಗೃಹಮಂತ್ರಿ ಮತ್ತು ಎನ್ಸಿಪಿ ನಾಯಕ ದೇಶಮುಖ್ ಅವರ ಮೇಲೆ ಸಿಂಗ್ ಅವರು ಹೂಡಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಲು ಈ ವರ್ಷದ ಮಾರ್ಚ್ನಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸಿಂಗ್ ಅವರು ತನ್ನ ಮುಂದೆ ಹಲವಾರು ಸಲ ಹಾಜರಾಗಲು ವಿಫಲರಾದ ಕಾರಣಕ್ಕಾಗಿ ದಂಡ ವಿಧಿಸಿತ್ತು ಮತ್ತು ಜಾಮೀನು ನೀಡಬಹುದಾದ ವಾರೆಂಟ್ ಅನ್ನು ಹೊರಡಿಸಿತ್ತು.