‘ಈ ಪ್ರದೇಶದಲ್ಲಿ ಎರಡು ಎಐಐಎಂಎಸ್ ಸ್ಥಾಪನೆ ಕೆಲಸ ಆರಂಭವಾಗಿದೆ. 2022ರ ವೇಳೆಗೆ ಕಣಿವೆಗೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಇದೀಗ ಜನರಿಂದಲೇ ಆಯ್ಕೆಯಾದವರು ಕಾಶ್ಮೀರದಲ್ಲಿ ಆಡಳಿತ ಮಾಡುವಂತಾಗಿದೆ ಹೊರತು ರಾಜರಿಗೆ ಅಥವಾ ರಾಣಿಯರಿಗೆ ಜನಿಸಿದವರಲ್ಲ’ ಎಂದು ಹೇಳಿದ ಗೃಹ ಸಚಿವ ಅಮಿತ್ ಶಾ, ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಸಾಕಷ್ಟು ಜಮೀನು ಇದೆ, ಹೀಗಾಗಿ ಜನರ ಜಮೀನನ್ನು ಕಬಳಿಸುವುದಿಲ್ಲ’ ಎಂದರು.