ನವದೆಹಲಿ: ‘ಕಡಲ್ಗಳ್ಳತನ ತಡೆ ಮಸೂದೆಗೆ ಸಂಸತ್ತು ಬುಧವಾರ ಅಂಗೀಕಾರ ನೀಡಿದೆ. ಕಡಲ್ಗಳ್ಳತನದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.
ರಾಜ್ಯಸಭೆಯಲ್ಲಿ ಮಂಡನೆಯಾದ ಈ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆಯಿತು. ಲೋಕಸಭೆಯಲ್ಲಿ ಸೋಮ ವಾರವೇ ಅನುಮೋದನೆ ದೊರೆತಿತ್ತು.
ಅಪರಾಧಿಗಳಿಗೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ನಿಬಂಧನೆ ಈ ಮಸೂದೆಯಲ್ಲಿದೆ.