ಎಲ್ಡಿಎಫ್ ಮತ್ತು ಯುಡಿಎಫ್ ಸಾಕು ಎಂದು ಕೇರಳದ ಜನ ಹೇಳುತ್ತಿದ್ದಾರೆ. ಬಿಜೆಪಿ ಮತ್ತು ಎನ್ಡಿಎಯ ಅಭಿವೃದ್ಧಿ ಅಜೆಂಡಾದತ್ತ ಮುಖ ಮಾಡುತ್ತಿದ್ದಾರೆ. ಪ್ರಗತಿಪರರು ಮತ್ತು ವಿದ್ಯಾವಂತರನ್ನು ರಾಜಕೀಯಕ್ಕೆ ತಂದಿರುವುದಕ್ಕೆ ಕೇರಳದ ವೃತ್ತಿಪರ ಸಮುದಾಯವು ಮೆಚ್ಚುಗೆ ವ್ಯಕ್ತಪಡಿಸಿದೆ. ಮೆಟ್ರೋಮ್ಯಾನ್ ಇ. ಶ್ರೀಧರನ್ ಅವರನ್ನು ಬಿಜೆಪಿಯು ರಾಜಕೀಯಕ್ಕೆ ಕರೆತಂದಿರುವುಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೋದಿ ಹೇಳಿದ್ದಾರೆ.