ಮಂಗಳವಾರ ರಾತ್ರಿ ನಡೆದ ಅಧಿಕೃತ ಬೀಳ್ಕೊಡುಗೆ ಸಂದರ್ಭದಲ್ಲಿ ವಿದಾಯ ಹೇಳಿದ ಸಿಎಂ ಜಗನ್, ‘ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧಗಳು ವಿವಾದಗಳಿಂದ ಹಾಳಾಗಿದ್ದ ಸಮಯದಲ್ಲಿ, ಹರಿಚಂದನ್ ಅವರು ವಿವಿಧ ಸಾಂವಿಧಾನಿಕ ಸಂಸ್ಥೆಗಳ ನಡುವೆ ಅತ್ಯಂತ ಸಮನ್ವಯತೆಯನ್ನು ಸಾಧಿಸುವ ಮೂಲಕ ರಾಜ್ಯಪಾಲರ ಹುದ್ದೆಗೆ ಹೆಚ್ಚಿನ ಘನತೆಯನ್ನು ತಂದರು’ ಎಂದು ಸ್ಮರಿಸಿದರು.