‘ಅಗತ್ಯ ಅಧ್ಯಯನದ ಬಳಿಕವೇ ರೈಲ್ವೆ ವಿಭಾಗದ ಘೋಷಣೆ ಮಾಡಲಾಗಿತ್ತು. 3 ರಾಜ್ಯಗಳನ್ನು ಒಳಗೊಂಡ ವಿಭಾಗ ಸ್ಥಾಪನೆ ಅಗತ್ಯವಿದೆ ಎಂದು ಹುಬ್ಬಳ್ಳಿ ರೈಲ್ವೆ ವಲಯದ ವ್ಯವಸ್ಥಾಪಕರಾಗಿದ್ದ ಮಿತ್ತಲ್ ಸಲಹೆ ನೀಡಿದ್ದರು. ಈಗ ಕಾರ್ಯಸಾಧುವಲ್ಲ ಎಂದಾದಲ್ಲಿ, ವಿಭಾಗ ಸ್ಥಾಪನೆ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ಮರಳಿ ನೀಡಿಲ್ಲವೇಕೆ, ಆ ಭೂಮಿಗೆ ತಂತಿಬೇಲಿ ಹಾಕಿದ್ದೇಕೆ’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.