ಪಕ್ಷಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಧಾನಸಭೆ ಸಚಿವಾಲಯಕ್ಕೆ ಪನ್ನೀರಸೆಲ್ವಂ ಮನವಿ ಸಲ್ಲಿಸಿದ್ದಾರೆ. ಪಳನಿಸ್ವಾಮಿ ಅವರು ಪ್ರತಿಪಕ್ಷದ ನಾಯಕರಾಗಿದ್ದು, ಪನ್ನೀರಸೆಲ್ವಂ ಅವರು ಉಪನಾಯಕರಾಗಿದ್ದಾರೆ. ತಾವು ಪಕ್ಷದ ಖಜಾಂಚಿಯಾಗಿದ್ದು, ತಮ್ಮ ಅನುಮತಿಯಿಲ್ಲದೇ ವಹಿವಾಟು ನಡೆಸಬಾರದು ಎಂದು ಪನ್ನೀರಸೆಲ್ವಂ ಅವರು ಬ್ಯಾಂಕ್ಗಳಿಗೆ ಸೂಚಿಸಿದ್ದಾರೆ. ದಿಂಡಿಗಲ್ ಸಿ. ಶ್ರೀನಿವಾಸನ್ ಅವರು ಪಕ್ಷದ ಹೊಸ ಖಜಾಂಚಿಯಾಗಿದ್ದಾರೆ ಎಂದು ಪಳನಿಸ್ವಾಮಿ ಅವರು ಬ್ಯಾಂಕ್ಗಳಿಗೆ ಮಾಹಿತಿ ನೀಡಿದ್ದಾರೆ.