ಅಧಿಸೂಚನೆ ಪರಿಣಾಮ ಈಗಲೂ ಮುಂದುವರಿದಿದೆ. ಲಡಾಖ್, ಮಿಜೋರಾಂ, ಲಕ್ಷ್ಮದ್ವೀಪ, ಕಾಶ್ಮೀರ, ನಾಗಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಮಣಿಪುರದಲ್ಲಿ ಇಂದಿಗೂ ಅಲ್ಪಸಂಖ್ಯಾತರಾಗಿರುವ ಜುದಾಯಿ, ಬಹಾಯಿ, ಹಿಂದೂಗಳು ತಮ್ಮ ಆಡಳಿತದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಆಗುತ್ತಿಲ್ಲ. ಇದಕ್ಕೆ ರಾಜ್ಯ ಮಟ್ಟದಲ್ಲಿ ‘ಅಲ್ಪಸಂಖ್ಯಾತರನ್ನು’ ಗುರುತಿಸದೇ ಇರುವುದೇ ಕಾರಣ. ಇದರ ಪರಿಣಾಮ, ಸಂವಿಧಾನದ ವಿಧಿ 29ರ ಅನ್ವಯ ಇರುವ ಮೂಲಭೂತಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಿವರಿಸಿದ್ದಾರೆ.