'ಪ್ರಧಾನ ಮಂತ್ರಿಗೆ ಭದ್ರತೆ ಮತ್ತು ಸೌಕರ್ಯಗಳು ಮುಖ್ಯವೆನಿಸಿದೆ. 'ಮೇಕ್ ಇನ್ ಇಂಡಿಯಾ', 'ಸ್ಟಾರ್ಟ್ ಅಪ್ ಇಂಡಿಯಾ'ದಂತಹ ಸ್ವದೇಶಿ ಉಪಕ್ರಮಗಳನ್ನು ಆರಂಭಿಸಿರುವ ಮೋದಿ, ವಿದೇಶಿನಿರ್ಮಿತ ಕಾರನ್ನು ಬಳಕೆ ಮಾಡುತ್ತಿದ್ದಾರೆ' ಎಂದು ರಾವುತ್ ಲೇವಡಿ ಮಾಡಿದರು.
'ಮಾಜಿ ಪ್ರಧಾನಿ ಜವಹರಲಾಲ್ ನೆಹರೂಅಪಾಯದ ನಡುವೆಯೂ ದೇಶಿ ನಿರ್ಮಿತ ಅಂಬಾಸಿಡರ್ ಕಾರು ಬಳಕೆ ಮಾಡುತ್ತಿದ್ದರು. ಇಂದಿರಾ ಗಾಂಧಿ ಕೂಡ ಜೀವ ಬೆದರಿಕೆ ಇದ್ದರೂ ಸಿಖ್ ಭದ್ರತಾ ಸಿಬ್ಬಂದಿಯನ್ನು ಬದಲಿಸಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡಾ ಎಲ್ಟಿಟಿಇ ಬೆದರಿಕೆಯಿದ್ದರೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರ ಜತೆ ಬೆರೆತುಕೊಳ್ಳುವುದರಿಂದ ಹಿಂದೆ ಸರಿದಿರಲಿಲ್ಲ' ಎಂದು ಹೇಳಿದರು.