ದೇಶದ 130 ಕೋಟಿ ಜನರ ಸೇವೆಯಲ್ಲಿ ನಾನು ಯಾವಾಗಲೂ ತಲೆ ಬಾಗುತ್ತೇನೆ, ದೀದಿ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಬಹುದು ಆದರೆ, ಬಂಗಾಳದ ಜನರ ಕನಸುಗಳನ್ನು ಒದೆಯಲು ನಾನು ಆಕೆಗೆ ಅವಕಾಶ ನೀಡುವುದಿಲ್ಲ. ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್ ಮತ್ತು ಕೇಂದ್ರದ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಹಗರಣಗಳನ್ನು ಮಾಡಲು ಸಾಧ್ಯವಿಲ್ಲವಾದ್ದರಿಂದ, ಇಲ್ಲಿನ ಟಿಎಂಸಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಮೋದಿ ಹೇಳಿದ್ದಾರೆ.