‘ದೇಶದಾದ್ಯಂತ ಇದುವರೆಗೆ ಸುಮಾರು 60 ಕೋಟಿ ಕೋವಿಡ್ ನಿರೋಧಕ ಲಸಿಕೆಗಳನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದ ಅವರು, ‘ಕೇಂದ್ರ ಸರ್ಕಾರವು ₹ 100 ಲಕ್ಷ ಕೋಟಿ ಮೌಲ್ಯದ ‘ಅಮೃತ್ ಕಾಲ್’ (ಅಮೃತ ಕಾಲ) ಹೆಸರಿನಲ್ಲಿ ಮಾರ್ಗಸೂಚಿಯೊಂದನ್ನು ರಚಿಸಿದೆ. ಇದರ ಪ್ರಕಾರ ಮುಂದಿನ 25 ವರ್ಷಗಳಲ್ಲಿ ಭಾರತದ ರಸ್ತೆಗಳು, ಕೈಗಾರಿಕೆ ಮತ್ತು ರೈಲ್ವೆ ವಲಯಕ್ಕೆ ಮೂಲಸೌಕರ್ಯಗಳನ್ನು ಬಲಪಡಿಸಲು ಮೂಲಕ ಸ್ವಾವಲಂಬಿ ಮಾಡುವ ದೂರದೃಷ್ಟಿಯನ್ನು ಪ್ರಧಾನಿ ಹೊಂದಿದ್ದಾರೆ’ ಎಂದರು.