ನವದೆಹಲಿ:ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಚನಾ ದಿನದ ಅಂಗವಾಗಿ, ಅಲ್ಲಿನ ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ಅರುಣಾಚಲ ಪ್ರದೇಶದ ಜನರಿಗೆ ಅವರ ರಾಜ್ಯ ರಚನೆಯಾದದಿನದ ಶುಭಾಶಯಗಳು. ಈ ರಾಜ್ಯದ ಜನರು ಅದ್ಬುತ ಪ್ರತಿಭೆ ಮತ್ತು ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಅರುಣಾಚಲ ಪ್ರದೇಶವು ಪ್ರಗತಿಯ ಹೊಸ ಎತ್ತರಕ್ಕೇರಲಿ' ಎಂದು ಹಾರೈಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಮಿಜೋರಾಂ ಜನರಿಗೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮೋದಿ ಪ್ರಾರ್ಥಿಸಿದ್ದಾರೆ.
'ಮಿಜೋರಾಂಜನರಿಗೆ ಅವರ ರಾಜ್ಯೋತ್ಸವ ದಿನದ ಶುಭಾಶಯಗಳು.ಮಿಜೋರಾಂನ ರೋಮಾಂಚನಕಾರಿ ಸಂಸ್ಕೃತಿ ಮತ್ತು ರಾಷ್ಟ್ರೀಯ ಪ್ರಗತಿಗೆ ನೀಡಿದ ಕೊಡುಗೆಗಳ ಬಗ್ಗೆ ಭಾರತವು ಬಹಳ ಹೆಮ್ಮೆ ಪಡುತ್ತದೆ. ರಾಜ್ಯದ ಪ್ರಜೆಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹಾಎರಡೂ ರಾಜ್ಯಗಳಿಗೆ ಶುಭ ಕೋರಿದ್ದಾರೆ.
1986ರಲ್ಲಿ ಭಾರತದ ಸಂವಿಧಾನಕ್ಕೆ 53ನೇ ತಿದ್ದುಪಡಿ ತರುವುದರೊಂದಿಗೆ1987ರ ಫೆ.20ರಲ್ಲಿಅರುಣಾಚಲ ಪ್ರದೇಶವು ರಾಜ್ಯದ ಸ್ಥಾನಮಾನ ಪಡೆದುಕೊಂಡಿತು. ಅದೇ ದಿನ ಮಿಜೋರಾಂ ರಾಜ್ಯವೂ ರಚನೆಯಾಯಿತು.