ಇದಕ್ಕೂ ಬಿಜೆಪಿಯಿಂದ ಖಂಡನೆ ವ್ಯಕ್ತವಾಗಿದೆ. ‘ಪ್ರಧಾನಿ ಭೇಟಿಯನ್ನು ಯಾಕೆ ರಾಜಕೀಯಗೊಳಿಸಬೇಕು? ಜನರಿಗೆ ಉಪಯೋಗವಾಗುವ ಹಲವು ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಿಸಲು ಪ್ರಧಾನಿಯವರು ರಾಜ್ಯಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಅವರೇನು ಭಾರತದ ಪ್ರಧಾನಿಗಳಲ್ಲವೇ? ಅಥವಾ ತೆಲಂಗಾಣ ಭಾರತದ ಭಾಗವಲ್ಲವೇ?‘ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.