ಉತ್ತರ ಪ್ರದೇಶ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಮ್ ಭವನ್ ಎಂಬುವವರನ್ನು ನ.16ರಂದು ಬಂಧಿಸಲಾಗಿತ್ತು. ನಂತರದಲ್ಲಿ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ದುರ್ಗಾವತಿಯನ್ನು ಡಿ.28ರಂದು ಸಿಬಿಐ ಬಂಧಿಸಿತ್ತು. ಚಿತ್ರಕೂಟ, ಬಾಂದಾ ಹಾಗೂ ಹಮಿರ್ಪುರ ಜಿಲ್ಲೆಯಲ್ಲಿ ಐದರಿಂದ 16 ವರ್ಷದ 50ಕ್ಕೂ ಅಧಿಕ ಮಕ್ಕಳನ್ನು ಇವರು ಲೈಂಗಿಕ ಶೋಷಣೆಗೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಶೋಧದ ವೇಳೆ ಎಂಟು ಮೊಬೈಲ್ ಫೋನ್, ಲ್ಯಾಪ್ಟಾಪ್, ಲೈಂಗಿಕ ಶೋಷಣೆಯ ದೃಶ್ಯಗಳಿದ್ದ ಡಿಜಿಟಲ್ ಸಾಕ್ಷ್ಯಗಳನ್ನು ಸಿಬಿಐ ಪತ್ತೆಹಚ್ಚಿತ್ತು.