ಬಳಿಕ ಟ್ವೀಟ್ ಮಾಡಿರುವ ಅವರು, ಉಭಯ ರಾಜ್ಯಗಳಿಂದ ತಲಾ ಮೂವರು ಮಂತ್ರಿಗಳಂತೆ ಒಟ್ಟು ಆರು ಮಂತ್ರಿಗಳ ಸಮಿತಿ ರಚನೆ ಮಾಡಲಾಗುವುದು. ಅವರು ಒಟ್ಟಿಗೆ ಕುಳಿತು ಇದರ ಬಗ್ಗೆ ವಿಸ್ತೃತ ಚಿಂತನೆ, ಚರ್ಚೆ ನಡೆಸಲಿದ್ದಾರೆ. ಎರಡೂ ರಾಜ್ಯಗಳ ನಡುವೆ ಇನ್ನೂ ಕೆಲವು ಸಣ್ಣಪುಟ್ಟ ವಿವಾದಗಳಿವೆ. ಅದು ಸಾಮಾನ್ಯವಾಗಿ ಉಭಯ ರಾಜ್ಯಗಳ ನಡುವೆ ಇರುತ್ತದೆ. ಇದನ್ನು ಕೂಡ ಈ ಸಮಿತಿಯೇ ಬಗೆಹರಿಸಲಿದೆ ಎಂದರು.