ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ಗೆ ದಾವುದ್‌ ತಮ್ಮನ ಸಹಚರನಿಂದ ಕೊಲೆ ಬೆದರಿಕೆ

Last Updated 18 ಜೂನ್ 2022, 10:42 IST
ಅಕ್ಷರ ಗಾತ್ರ

ಭೋಪಾಲ್: ಭೂಗತ ದೊರೆ ದಾವೂದ್‌ ಇಬ್ರಾಹಿಂನ ತಮ್ಮ ಇಕ್ಬಾಲ್‌ ಕಸ್ಕರ್‌ನ ಸಹಚರನಿಂದ ತಮಗೆ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಅವರು ಶನಿವಾರ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಗ್ಯಾ ಅವರಿಗೆ ಕರೆ ಮಾಡಿದಕಸ್ಕರ್‌ನ ಸಹಚರ ಎನ್ನಲಾದ ವ್ಯಕ್ತಿ, ನೀವು ಮುಸ್ಲಿಮರ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ವಿಷಬೀಜ ಹರಡುತ್ತಿದ್ದೀರಿ’ ಎಂದು ಹೇಳಿದ್ದಾನೆ ಎಂದುಟಿ.ಟಿ ನಗರ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಚೆನ್‌ ಸಿಂಗ್‌ ರಘುವಂಶಿ ತಿಳಿಸಿದ್ದಾರೆ.

ಕೊಲೆ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 506 (ಅಪರಾಧ ಬೆದರಿಕೆ) ಹಾಗೂ 507ಗಳ (ಅನಾಮಧೇಯ ಸವಹನದಿಂದ ಅಪರಾಧ ಬೆದರಿಕೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT